Friday, May 31, 2013

ತುಂಬು ಹೃದಯದ ಆಹ್ವಾನ..

ಆತ್ಮೀಯ ಗೆಳೆಯ , ಚುಕ್ಕಿ ಸಂಸ್ಥೆ ಯ ಸಂಘಟನಾ ಕಾರ್ಯದರ್ಶಿ, ಮಧುಸೂಧನ್  ಎಸ್. ಕೆ. ಮದುವೆ ನಾಡಿದ್ದು 02/06/2013 ರಂದು ಹುಣಸೂರಿನ ನಂಜಮ್ಮ ಚನ್ನಬಸಮ್ಮ ಕಲ್ಯಾಣ ಮಂಟಪ ದಲ್ಲಿ ನಡೆಯಲಿದೆ. ದಯವಿಟ್ಟು ಎಲ್ಲಾ ಸ್ನೇಹಿತರು ಬನ್ನಿ.

ಮಧು ನನಗಿಂತ ಓರಗೆಯಲ್ಲಿ ಹಿರಿಯ. ಹುಣಸೂರಿನ ಸಂತ ಜೋಸೆಫರ  ಪ್ರೌಢ ಶಾಲೆ ಯಲ್ಲಿ ಕಲಿಯುವಾಗ ನನಗಿಂತ ಒಂದು ವರ್ಶ ಸೀನಿಯರ್. ಆತ ಸಲುಗೆಯಲ್ಲಿ ಸೀನಿಯರ್ ಆಗಿರಲೆ ಇಲ್ಲ. ಅಂತಹ ಆತ್ಮೀಯತೆ ಅವನ ಒಡನಾಟ. ಬಟ್ ಆತ ಗೆಳೆತನದಲ್ಲಿ, ಪ್ರೀತಿಯಲ್ಲಿ, ಸಮಾಜಮುಖಿ ಕೆಲಸಗಳಲ್ಲಿ, ಗುಣ -ನಡತೆ-ಸಂಸ್ಕಾರ-ಸಂಪರ್ಕ ಗಳಲ್ಲಿ ನಿಜಕ್ಕೂ ಸೀನಿಯರ್. ಹಾಗಾಗಿಯೇ ಗೆಳೆಯರೆಲ್ಲ ಕೂಡಿ ಕಟ್ಟಿದ ಸಂಸ್ಥೆ " ಚುಕ್ಕಿ ಸಂಸ್ಥೆ" ಯಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ , ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಅಂತೂ ಇಂತೂ ಮಧು ತನ್ನ ಬದುಕಿನ , ಹೊಸ ಕನಸುಗಳ ಯಾತ್ರೆ ಯ ಸಂಘಟನೆಗೆ ನಿಂತಿದ್ದಾರೆ. ಕೆ. ಆರ್. ಆಶಾರಾಣಿಯವರನ್ನು ಹೊಸಬದುಕಿನ ರಥಯಾತ್ರೆಗೆ ಜೊತೆಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ತಾಳಿ ಕಟ್ಟುವ ಶುಭ ವೇಳೆ ನಾವೆಲ್ಲಾ ಸಾಕ್ಷಿಯಾಗುವ. ನಿರ್ಮಲ ಮನಸ್ಸಿನ ಸ್ನೇಹ ಜೀವಿ, ಆತ್ಮೀಯ ಗೆಳೆಯ ನ ಹೊಸ ಬದುಕಿಗೆ ಮನತುಂಬಿ ಹಾರೈಸುವ. ನೀವೂ ಬನ್ನಿ. ಹಾಗೆ ನನ್ನ ಮನೆ "ಧನ್ಯ"ಕ್ಕೂ ನಾನು ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ.


ಬಹಳ ದೂರ. ಇರುವುದೊಂದು ಭಾನುವಾರ, ಸಕತ್ತ್ ಮಜ ಮಾಡೋಣ ಅಂತ ತೀರ್ಮಾನಿಸಿದ್ದರೆ ಅಲ್ಲಂದಲೇ ಹರಸಿ. ನಮ್ಮ-ನಿಮ್ಮೆಲ್ಲರ ಹಾರೈಕೆಗಳು ಆ ಹೊಸ ಜೋಡಿ ಯನ್ನು ಸದಾ ಕಾಲ ಸಂತಸದಲ್ಲಿ ತೇಲಿಸಲಿ. ಇಲ್ಲ ಬಿಡುವು ಮಾಡಿಕೊಂಡು ಒಂದು ಸಂದೇಶ ಕಳುಹಿಸಿ. ಅವನ ಜಂಘ್ಹಮ ಘಂಟೆ ಯ ನಂಬರ್ 9060369096, 9620552706.

ಮದುವೆಯಲ್ಲಿ ಭೆಟ್ಟಿಯಾಗೋಣ. ಅಲ್ಲಿಯವರೆಗೆ ಮಾತು ಹಿಡಿದಿಟ್ಟಿರಿ. ಹಳೆ ನೆನಪುಗಳನ್ನು ಹರಟೋಣ.

ಶುಭ ಸಂಜೆ, ಶುಭ ವಾರಂತ್ಯ.

ನಿಮ್ಮ ನೀರಿಕ್ಷೆಯಲ್ಲಿ..

ಚುಕಿ........

1 comment:

@spn3187 ಕನ್ನಡಿಗ ಶಿವಕುಮಾರ ನೇಗಿಮನಿ said...

ಉತ್ತಮವಾಗಿದೆ.ನನ್ನ ಭಾವ ಲೋಕಕ್ಕೆ ಒಮ್ಮೆ ಬನ್ನಿ, ತಮಗಿದೋ ಸವಿನಯ ಆಮಂತ್ರಣ....http://spn3187.blogspot.in/

ಚುಕ್ಕಿ ಸಂಸ್ಥೆ (ರಿ).

. ಬಿಂದುವಿನಿಂದ ಅನಂತದೆಡೆಗೆ .......