Sunday, October 26, 2008

ಮೊದಲ ಮಾತು ...

ನಿಮ್ಮ ಬದುಕಿನ ಪಯಣದಲ್ಲಿ ನಮ್ಮ ಸಾಂಗತ್ಯ.
ನಮ್ಮ ಜೀವಿತದಲ್ಲಿ ಈ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಬೇಕು ಎಂಬ ಉದ್ದೇಶದಿಂದ ಚುಕ್ಕಿ ಸಂಸ್ಥೆ ಹುಟ್ಟಿಕೊಂಡಿದೆ. ಈ ಉತ್ತಮ ಕೊಡುಗೆ ಎಂದರೆ "ನಿಸ್ವಾರ್ಥ ಸೇವೆ". ನಿಸ್ವಾರ್ಥ ಸೇವೆಯ ಮೂಲಕ "ಗ್ರಾಮೀಣಾಭಿವ್ರುದ್ದಿ ". ಅದರ ಮೂಲಕ "ಭಾರತದ ಅಭಿವೃದ್ದಿ". ಅದರೊಟ್ಟಿಗೆ ಸಮಾಜದ ಸರ್ವತೋಮುಖ ಬೆಳವಣಿಗೆ ನಮ್ಮ ಧ್ಯೇಯ.

ಇದು ಶ್ರೀಮಂತರ, ಸಮಯಸಾಧಕರ, ಮತೀಯವಾದಿಗಳ, ಸ್ವಾರ್ಥ ಸಾಧಕರ ಸಂಸ್ಥೆಯಲ್ಲ. ಬದಲಾಗಿ ಬದುಕಿನ ಕಷ್ಟಗಳನ್ನೆದುರಿಸಿ , ಸಾಧನೆಯ ಕನಸು ಹೊತ್ತು, ಸಾಗಿ, ಅಲ್ಪಮಟ್ಟಿನ ಯಶಸ್ಸು ಕಂಡು, ಇನ್ನೂ ಸಾಧಿಸಬೇಕೆನ್ನುವ ಉತ್ಸಾಹದ ಒಯಸ್ಸಿಸ್ಸನ್ನಿರಿಸಿಕೊಂಡಿರುವ "ಮಧ್ಯಮ ವರ್ಗದ ಯುವ ಚೇತನಗಳ ಕನಸಿನ ಕೂಸು". ಇಲ್ಲಿರುವುದು ಅಮಿತ ಉತ್ಸಾಹ, ಅಸಾಧಾರಣ ಜ್ಞಾನ ಸಂಪತ್ತು, ಬದುಕು ಸವೆಸಲು ಕಷ್ಟವಾದ ಮಂದಿಗೆ ಒಂದಸ್ಟು ಆರ್ಥಿಕ ಸಹಾಯ, ಸಲಹೆ, ಮಾರ್ಗದರ್ಶನ. ನಿಮ್ಮ ಬದುಕಿನ ಪಯಣದಲ್ಲಿ ನಮ್ಮ ಸಾಂಗತ್ಯ.

"ಚುಕ್ಕಿ ಸಂಸ್ಥೆ " , ಸುಂದರ ಬದುಕು ಕಟ್ಟಿ ಕೊಳ್ಳಲು ನಿಜವಾದ ಗೆಳೆಯ.

Tuesday, October 21, 2008

ಬೆಳಗಿಸೋಣ ಚುಕ್ಕಿಯ.....

ನಮಸ್ತೆ ಬಂಧುಗಳೇ,
"ಗ್ರಾಮೀಣಾ ಭಿವ್ರುದ್ದಿ ಯ ಮೂಲಕ ನವ ಭಾರತ ನಿರ್ಮಾಣ" da ಕನಸು ಹೊತ್ತುಕೊಂಡು ಹುಟ್ಟಿ ಕೊಂಡಿರೋ ಸಮಾನ ಮನಸ್ಕ ಯುವ ಮನಸ್ಸುಗಳ ಸಮಾಜಮುಖಿ ಸೇವಾ ಸಂಸ್ಥೆ "ಚುಕ್ಕಿ". ಅದಮ್ಯ ಕನಸುಗಾರ ಲಿಂಗೆಶ್ ಹುಣಸೂರ್ ಈ ಸಂಸ್ಥೆಯ ಸಂಸ್ಥಾಪಕರು. "ಸೇವೆ, ಶಿಕ್ಷಣ, ಜಾಗೃತಿ, ಅಭಿವೃದ್ದಿ " ಈ ಸಂಸ್ಥೆಯ ಮೂಲ ಮಂತ್ರಗಳು.

Saturday, May 3, 2008

ಕಾರ್ಯಾಲಯ ವಿಳಾಸ...Official Address

ನಮ್ಮ ಸಂಸ್ಥೆಯ ಮಹಾ ಕಾರ್ಯಾಲಯ... our office

ಚುಕ್ಕಿ ಸಂಸ್ಥೆ.
(REG NO:MYS - S 47- 2008/09)
# 24 41 , ಗೋಕುಲ ಬಡಾವಣೆ,
ಹುಣಸೂರು , ಮೈಸೂರು ಜಿಲ್ಲೆ,
ಕರ್ನಾಟಕ - 571 105 .

ದೂರವಾಣಿ : Telephone No:

9341410413

9964438393

ಈ ಅಂಚೆ: E-MAIL

chukkisamsthe@gmail.com

ಅಂತರ್ಜಾಲ ತಾಣ: Web Address

http://chukkisamsthe.blogspot.com


OUR MAIN OFFICE

CHUKKI SAMSTHE(r)
#2441,Gokula Extn.,
Hunsur Town, Mysore dist.,
Karnataka - 571105

ಕಾರ್ಯಕಾರಿ ಸಮಿತಿ...

ಕಾರ್ಯಕಾರಿ ಸಮಿತಿ ಸದಸ್ಯರು

1 . ಗೌರವಾದ್ಯಕ್ಷರು ------ ಪ್ರೊ. ಮೋಹನ್ ಶರ್ಮ (MA.B.Ed)

ದೂ : 9341149049

2. ಅದ್ಯಕ್ಷರು -------- ನಂದೀಶ್ ಕೆ. ಸಿ. (BSc , B.Ed)

ದೂ : 996468523033

3. ಉಪಾದ್ಯಕ್ಷರು ------ ಲಕ್ಷ್ಮಿಕಾಂತ್ (MA,Tch,BEd)

ದೂ : 9480057205

4. ಪ್ರಧಾನ ಕಾರ್ಯದರ್ಶಿ---- ಯೋಗಿಶ್ ಪ್ರಭು (MA. , MBA )

ದೂ : 99004510765

5. ಸಹ ಕಾರ್ಯದರ್ಶಿ----- ಸಿ . ಎನ್. ಗೋಪಾಲ್ ಗೌಡ್ರು (MA,M.Phil,B.Ed)

ದೂ : 9945374949

6. ಸಂಘಟನ ಕಾರ್ಯದರ್ಶಿ ----- ಮಧುಸೂಧನ್ ಎಸ್ .ಕೆ. (MA)

ದೂ : 998602807

7. ಖಜಾಂಚಿ ------- ರವಿಪ್ರಸಾದ್ ಕೆ. (M.Sc., M.Ed.,)

ದೂ : 9844775616

ಸದಸ್ಯತ್ವ.....

  • ಈ ಸಂಸ್ಥೆಯ ಸದಸ್ಯರಾಗಬಯಸುವವರು 18 ವರ್ಷಕ್ಕೆ ಮೆಲಿನವರಾಗಿರಬೇಕು.
  • ಸಂಸ್ಥೆಯ ಉದ್ದೇಶಗಳನ್ನು ಗೌರವಿಸುವನ್ತವರಾಗಿರಬೇಕು.
  • ಸ್ವಯಂ ವಿವರಗಳನ್ನೋಳಗೊಂಡ ಅರ್ಜಿಯನ್ನು ಬರ್ತಿ ಮಾಡಿ , 2 ಭಾವಚಿತ್ರಗಲೋಟ್ಟಿಗೆ,ಗೊತ್ತು ಮಾಡಿದ ಫಿ(ಶುಲ್ಕ) ವನ್ನು ಪಾವತಿ ಮಾಡಿ ಸಂಸ್ಥೆಯ ಸದಸ್ಯತ್ವ ವನ್ನು ಪಡೆದುಕೊಳ್ಳುವುದು.
  • ಈ ಸಂಸ್ಥೆಯ ಸದ್ಸ್ಯರಾಗುವವರು , ಜಾತ್ಯಾತೀತ ,ಪಕ್ಷಾತೀತ , ನಿಲುವನ್ನಿಟ್ಟುಕೊಂಡಿದ್ದು , ಸಾಮಾಜಿಕ ಕಳಕಳಿ ಹೊಂದಿರಬೇಕು.
  • ಪ್ರಾರಮ್ಬಿಕ ಸದಸ್ಯತ್ವ ಶುಲ್ಕ ರೂ 1,000 (ಒಂದು ಸಾವಿರ ರೂಪಾಯಿಗಳು).
  • ಪ್ರತಿ ಮಾಹೆ , ಆದಾಯದ ಶೇ 1 (ಒಂದು) ರಸ್ತು ಹಣವನ್ನ ಸಂಸ್ಥೆಗೆ ನೀಡುವುದು.
  • ಸಂಸ್ಥೆಯ ವತಿಯಿಂದ ಸದಸ್ಯರಿಗೆ "ಗುರುತಿನ ಪತ್ರ" ನೀಡಲಾಗುವುದು.
  • ಸದಸ್ಯರ ಹಿತ, ಯೋಗಕ್ಷೇಮವನ್ನು ಸಂಸ್ಥೆಯು ನೋಡಿಕೊಳ್ಳುವುದು.

Wednesday, April 30, 2008

ಚುಕ್ಕಿ...ಬದುಕು ಬೆಳಕಾಗಿಸುವ ಕಲ್ಪವಲ್ಲಿ....

ಪ್ರೀತಿಯ ಬಂದುಗಳೇ.....

" ಚುಕ್ಕಿ ಸಂಸ್ಥೆ "ಗೆ , ಪ್ರತಿ ದಿನ, ಪ್ರತಿ ಕ್ಷಣ ಹೊಸ ಹೊಸ ಚುಕ್ಕಿಗಳು ಸೇರ್ಪಡೆಯಾಗುತ್ತಿದ್ದಾರೆ....ಇದು ಸಂತೋಷದ ವಿಷಯ....ಸಮಾಜದಲ್ಲಿ ಆರೋಗ್ಯಕರ ಬದಲಾವನೆಯನ್ನ, ಸುದಾರಣೆಯನ್ನ ತರಲು ಹೊರಟಿರುವ ನಮ್ಮ ತೋಳುಗಳಿಗೆ ನಿಮ್ಮ ಸೇರ್ಪಡೆ ನೂರ ಆನೆಯ ಬಲವನ್ನ ತಂದಂತಾಗಿದೆ....ನಿಮ್ಮ ಸಮಾಜಮುಕಿ ನಿಲುವಿಗೆ, ಸೇವಾ ಮನಸ್ಸಿಗೆ ನಮ್ಮ ಕೋಟಿ ಕೋಟಿ ಅನಂತ ನಮನಗಳು ಹಾಗು ಧನ್ಯವಾದಗಳು.

ಸಾಮಾಜಿಕವಾಗಿ ಹಾಗು ಸಾಂಸ್ಕೃತಿಕವಾಗಿ ಕಾರ್ಯ ಚಟುವಟಿಕೆಗಳನ್ನು ನಡೆಸಲು, ಸಾಂಘಿಕ ಶಕ್ತಿಯಲ್ಲಿ ನಂಬಿಕೆ ಇರಿಸಿದ ಯುವ ಸಮಾನ ಮನಸ್ಸುಗಳು " ಕರ್ನಾಟಕ ಸಂಘ - ಸಂಸ್ಥೆ ಗಳ ಕಾಯಿದೆ , ೧೯೬೦ ರ ರೀತ್ಯಾ " ಚುಕ್ಕಿ ಸಂಸ್ಥೆ" ಯನ್ನು ರಚಿಸಲಾಗಿದೆ...ಹಾಗು...ಇದನ್ನು " ಜಿಲ್ಲಾ ನೋಂದಣಿ ಅಧಿಕಾರಿಗಳು, ಸಂಘ -ಸಂಸ್ಥೆ ಗಳ ನೋಂದಣಿ ಇಲಾಕೆ,ಮೈಸೂರು ಜಿಲ್ಲೆ, ಮೈಸೂರು" ಇಲ್ಲಿ ನೊಂದಾಯಿಸಲಾಗಿದೆ....REG NO: MYS - S 47 - 2008/09.

ಪ್ರಾರಂಭಿಕ ಹಂತದಲ್ಲಿ ಈ ಸಂಸ್ಥೆಯ ಕಾರ್ಯ ವ್ಯಾಪ್ತಿ ಮೈಸೂರು ನಗರ ಹಾಗು ಜಿಲ್ಲೆ ಯನ್ನು , ಒಳಗೊಂಡಿದ್ದು ನಂತರದ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ಥರಿಸಲಾಗುವುದು....ಆದರೆ ನಮ್ಮ ಸೇವಾ ಮನಸ್ಸುಗಳಿಗೆ ಯಾವುದೇ ಗಡಿಯ ಹಂಗಿಲ್ಲ....ರಾಜ್ಯದ ಎಲ್ಲ ಭಾಗಳಲ್ಲಿ ಈ ಸಂಸ್ಥೆಯ ಸದಸ್ಯರಿರುವುದು, ಸಂಸ್ಥೆಯ ಹೆಮ್ಮೆ.

ಪ್ರೀತಿಯ ಬಂಧುಗಳೇ, ಮತ್ತೊಮ್ಮೆ ಸಂಸ್ಥೆಗೆ ಹೃದಯಪೂರ್ವಕ ಸ್ವಾಗತ ಕೋರುತ್ತ, ತಮ್ಮನ್ನ ಅಭಿನಂದಿಸುತ್ತೇನೆ.....ಅಂತರ್ಜಾಲದಲ್ಲಿ , ನಿಮ್ಮ ಸುತ್ತ ಮುತ್ತಲಿನಲ್ಲಿ ಸೇವಾ ಮನಸ್ಸು ಹೊಂದಿರುವ ನಿಮ್ಮ ಆತ್ಮಿಯರಿಗೆ ಸಂಸ್ಥೆಯ ಬಗ್ಗೆ ತಿಳಿಸಿ...ಎಲ್ಲ ಚುಕ್ಕಿಗಳು ಒಟ್ಟಿಗೆ ಸೇರಿದರೆ , ಜಗತ್ತಿಗೆ ಬೆಳಕು ನೀದಬಹುದಲ್ವಾ....ಸಾಂಘಿಕ ಶಕ್ತಿ ಸದಾ ಜೀವಂತವಾಗಿರಲಿ.....

ಪ್ರೀತಿಯಿಂದ...
ಚುಕ್ಕಿ...
ಬಿಂದುವಿನಿಂದ ಅನಂತ ದೆಡೆಗೆ ................
HELLO: 9964438393
E-MAIL: lingeshkc9@gmail.com
Address: LINGESH K C
POSTAL ASST.,
DEVANAHALLI POST OFFICE,
BANGALORE(R) DIST,
KARNATAKA - 562 110

*************** ಶುಭ ಮಸ್ತು ********************

Sunday, April 27, 2008

ವಿವೇಕ ವಾಣಿ...

ಆತ್ಮಿಯರೇ...ಒಂದು ನಿಮಿಷ ಸ್ವಾಮಿ ವಿವೇಕಾನಂದರ ಈ ವಾಕ್ಯಗಳನ್ನ ಗಮನಿಸಿ....ನಿಮ್ಮಿಂದ ಏನಾದ್ರು ಮಾಡ್ಲಿಕ್ಕೆ ಸಾದ್ಯ ಅಂತ ಒಪ್ಪಿಕೊಲ್ಲೋದಾದ್ರೆ....ನಮಗೊಂದು ಕರೆ ಮಾಡಿ....9902559954

" ಐಶ್ವರ್ಯ ಹೀನರಾದ, ನಿರ್ಭಗ್ಯರಾದ, ವಿವೇಚನಾ ಶಕ್ತಿಯನ್ನು ಕಳೆದುಕೊಂಡು ಪದದಳಿತರಾದ, ಉಪವಾಸದಿಂದ ನರಳುವ, ಕಾದಡಿ ಅಸೂಯೆ ಪಡುವ ನಮ್ಮ ದೇಶದವರನ್ನು ಪ್ರೀತಿಸಿದರೆ, ಅವರು ಮತ್ತೊಮ್ಮೆ ಮೇಲೆ ಯೇಳುವರೆಂದು ನಾನು ನಂಬುತ್ತೇನೆ..ನೂರಾರು ಜನ ಉದಾರ ಹೃದಯರಾದ ಸ್ತ್ರೀ ಪುರುಷರು ಜೀವನದ ಸುಖ ವನ್ನು ಅನುಭವಿಸಬೇಕೆಂಬ ಆಸೆಯಲ್ಲವನ್ನು ತೊರೆದು, ಬಡತನ ಅಜ್ಞಾನ ಕೂಪದಲ್ಲಿ ದಿನೇ ದಿನೇ ಆಳ ಆಳಕ್ಕೆ ಮುಳುಗುತ್ತಿರುವ ನಮ್ಮ ನಾಡಿನ ಲಕ್ಷಾಂತರ ಜನರ ಹಿತಕ್ಕೊಸುಗವಾಗಿ ತವಕಿಸಿ ಯಾವಾಗ ಕೈಲಾದ ಮಟ್ಟಿಗೆ ಕಸ್ಟ ಪದುವರೋ , ಆಗ ಮಾತ್ರ ಭಾರತ ಕಂಡ ಮೇಲೆ ಏಳುವುದು"
------------------------------------ಸ್ವಾಮಿ ವಿವೇಕಾನಂದರು------------------------------

Monday, March 10, 2008

ಬೆಳೆವ ಕಂದನ ತೊದಲ ನುಡಿ..........

ಇದು ಯಾವ ಸಂಸ್ಥೆ..........?!!!!!!!!!!!!!!!
ಇದು ಯಾರ ಸಂಸ್ಥೆ.................?!!!!!!!!!!!!!!!!!

ನಮ್ಮ ಜೀವಿತದಲ್ಲಿ ಈ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಬೇಕು ಎಂಬ ಉದ್ದೇಶದಿಂದ ಚುಕ್ಕಿ ಸಂಸ್ಥೆ ಹುಟ್ಟಿಕೊಂಡಿದೆ...........ಈ ಉತ್ತುಮ ಕೊಡುಗೆ ಎಂದೆರೆ....." ನಿಸ್ವಾರ್ಥ ಸೇವೆ".. ನಿಸ್ವಾರ್ಥ ಸೇವೆಯ ಮೂಲಕ ಗ್ರಾಮೀನಾಭಿವ್ರುದ್ದಿ, ಆ ಮೂಲಕ ಭಾರತದ ಅಭಿವೃದ್ದಿ. ಅದರೊತ್ತಿಗೆ ಸಮಾಜದ ಸರ್ವತೋಮುಕ ಅಬಿವ್ರುದ್ದಿ ನಮ್ಮ ಧ್ಯೇಯ..
ಇದು ಶ್ರೀಮಂತರ, samaya saadakara , ಮತೀಯ ವಾದಿಗಳ, ಸ್ವಾರ್ಥ ಸಾದಕರ ಸಂಸ್ಥೆಯಲ್ಲ...ಬದಲಾಗಿ ಬದುಕಿನ kasta galannu edurisi , ಸಾದನೆಯ ಕನಸು ಹೊತ್ತು, ಸಾಗಿ, ಅಲ್ಪಮತ್ತಿನ ಯಶಸ್ಸು ಕಂಡು, ಇನ್ನೂ ಸಾದಿಸಬೇಕೆನೂವ ಉಸ್ತ್ಸಾಹದ ಒಯಸಿಸ್ಸನ್ನು ಇರಿಸಿಕೊಂಡಿರುವ ಮದ್ಯಮ ವರ್ಗದ ಹುಡುಗರ ಕನಸಿನ ಕೂಸು. ಇಲ್ಲಿರುವುದು ಅಮಿತ ಉತ್ಸಾಹ,. ಅಸಾಧಾರಣ ಜ್ಞಾನ ಸಂಪತ್ತು, ಬದುಕಿನಲ್ಲಿ ನವ ಚೈತನ್ಯ ತುಂಬಬಲ್ಲ ಆತ್ಮೀಯ ಮಾತು...ದಾರಿ ಕಾಣದೆ ಕಂಗಾಲಾದ, ಬದುಕು ಸವೆಸಲು ಕಸ್ತವಾದ ಮಂದಿಗೆ ಒಂದಸ್ತು ಆರ್ಥಿಕ ಸಹಾಯ, ಸಲಹೆ, ಮಾರ್ಗದರ್ಶನ...........ನಿಮ್ಮ ಬದುಕಿನ ಪಯಣದಲ್ಲಿ ನಮ್ಮ ಸಾಗತ್ಯ........

"ನಿಸ್ವಾರ್ಥ ಮನಸ್ಸು" ಗಳೇ ಈ ಸಂಸ್ಥೆಯ ಬಂಡವಾಳ.........."ನಿಸ್ವಾರ್ಥ ಸೇವೆ" ನಮ್ಮ ದಾರಿ......"ಅಭಿವೃದ್ದಿ" ನಮ್ಮ ಕನಸು.......ಆಂತರಿಕ ಹಾಗು ಬಹಿರಂಗ ಸಾಧನೆಗೆ ನಮ್ಮ ಮಟ್ಟಿನ ನೆರವು.........ಮುಂದುವರಿಯುತ್ತಿರುವ ಹಳ್ಳಿಗಳ ಮೂಲಕ ನವ ಭಾರತವನ್ನು ಕಟ್ಟುವ ಹಂಬಲ.........ಪ್ರಚಾರ ನಮಗೆ ಅಗತ್ಯವಿಲ್ಲ........ಲಾಬದ ಮಾತಂತೂ ಇಲ್ಲವೇ ಇಲ್ಲ.......ಇಲ್ಲಿರುವುದು ಸಮಾಜ ಮುಖಿಯಾದ , ಅಭಿವೃದ್ದಿ ಪಟದ ದಾರಿ, ಸಮಾಜದ ಸರ್ವಾನ್ಗೀನ ಅಬಿವ್ರುದ್ದಿ............ನಾವು ಸಾಧಿಸಿಯೇ ತೀರುತ್ತೆವೆನ್ನುವ, ಅದಕ್ಕಾಗಿ ನಮ್ಮ ಅಳಿಲು ಸೇವೆ ಗೈಉತ್ತೆನ್ನುವ ನಂಬಿಕೆ ಹೊತ್ತ ಯುವ ಸೈನಿಕರ ಸೈನ್ಯ ಚುಕ್ಕಿ ಸಂಸ್ಥೆ......ನೊಂದವರಿಂದ, ನೊಂದವರ, ನೊಂದವರಿಗಾಗಿ ಇರುವ ಸಂಸ್ಥೆ,,,,,,,,,,,ಕನಸುಗಳನ್ನು ಹುಟ್ಟಿಸುವ ತಾಣ...............ನನಸು ಮಾಡುವ ಜೀವನ ಯಾನ.......
ಒಟ್ಟಿನಲ್ಲಿ ಚುಕ್ಕಿ ಸುಂದರ ಬದುಕು ಕಟ್ಟಿವಲ್ಲಿ ನಿಜವಾದ ಗೆಳೆಯ........

Friday, March 7, 2008

ಗುರಿ - ಉದ್ದೇಶ -ಕನಸು

*********ಸಂಸ್ಥೆಯ ಕನಸುಗಳು*******


ಪ್ರಪಂಚವನ್ನ ಬದಲಿಸಲು,ಸುದಾರನೆಯನ್ನ ತರಲು ಇರುವ ಪ್ರಮುಖ ಅಸ್ತ್ರ ಅಂದರೆ, ಅದು "ಶಿಕ್ಷಣ " , ಮಾತ್ರ........ಅದರಿಂದ ಎಂತಹುದೇ ಆದ ಪವಾಡವನ್ನ ಸ್ರುಸ್ತಿಸಬಹುದು........ನಾವೆಲ್ಲ ಓದಿಕೊಂಡಿರೋ ಯುವಕರು.........ಹಾಗಾಗಿ........ಸುದಾರಣೆಗೆ ನಾವು ಬಳಸೋ ಅಸ್ತ್ರ........." ಶೈಕ್ಷಣಿಕ ಜಾಗೃತಿ , ಅದರ ಮೂಲಕ ಬದುಕಿನ ಅಂತರಂಗ ,ಬಹಿರಂಗ ವಿಕಸನ "..ಶಿಕ್ಷಣ, ಜಾಗೃತಿ, ವಿಕಸನ ".. ಈ ಸಂಸ್ಥೆಯ ಮೂಲ ಮಂತ್ರಗಳು.....
************ಸಂಸ್ಥೆಯ ಗುರಿಗಳು ***********

೦೧. ಶೈಕ್ಷಣಿಕ ಜಾಗೃತಿ ಮೂಲಕ ಗ್ರಾಮೀನಾಬಿವ್ರುದ್ದಿ.

೦೨. ಯುವಕರಲ್ಲಿ ಪರಿಸರ ಪ್ರಜ್ಞೆ, ಸಾಂಸ್ಕೃತಿಕ ಹಾಗು ಸಾಹಿತ್ಯದ ಅರಿವು muudisuvudu.

೦೩. ಸ್ವಾವಲಂಬಿ ಬದುಕಿನ ನಿರ್ಮಾಣ.

************ಸಂಸ್ಥೆಯ ಉದ್ದೇಶಗಳು*************

೦೧. ಸಂಸ್ಥೆಯ ವತಿಯಿಂದ ಕಾರ್ಯಕ್ಷೇತ್ರದಲ್ಲಿ ಹಿಂದುಳಿದ ಗ್ರಾಮದ ಪ್ರಾಥಮಿಕ/ಪ್ರೌಢ ಶಾಲೆಗಳನ್ನು ಆಯ್ಕೆ ಮಾಡಿ, ಆ ಶಾಲೆಯ ಸರ್ವಾನ್ಗೀನ ಅಭಿವೃದ್ದಿಗೆ ಶ್ರಮಿಸುವುದು.

೦೨. ಶಾಲೆಯಲ್ಲಿ ಓದುತ್ತಿರುವ ಹಿಂದುಳಿದ ಬಡ ಮಕ್ಕಳ ವಿಧ್ಯಭ್ಯಾಸಕ್ಕೆ ಸಹಾಯ,ಸಲಹೆ.

೦೩. ಶಾಲೆಯ ಸಹಯೋಗದಲ್ಲಿ ಗ್ರಾಮದಲ್ಲಿ swacchateya ಅರಿವು ಹಾಗೂ ಪರಿಸರ ಸಂರಕ್ಷಣೆ , ಜಾಗೃತಿ ಅದಾರಿತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

೦೪. ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ವಿವಿಧ ಸಾಂಸ್ಕೃತಿಕ ,ಶೈಕ್ಷಣಿಕ ಸ್ಪರ್ದೆಗಳು ಹಾಗೂ ಶಿಬಿರಗಳನ್ನು ನಡೆಸುವುದು.

೦೫. ಸಂಪನ್ಮೂಲ ವ್ಯಕ್ತಿಗಳಿಂದ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತರಬೇತಿ ಹಾಗು ಮಾರ್ಗದರ್ಶನ.

೦೬. ಇನ್ನಿತರ ಸಂಘ - ಸಂಸ್ಥೆ ಗಳ ಸಹಯೋಗದೊತ್ತಿಗೆ ಗ್ರಾಮಗಳಲ್ಲಿ ಆಗಾಗ್ಗೆ ವಿಸೇಶ ಕಾನೂನು ಶಿಬಿರ, ಆರೋಗ್ಯತಪಾಸಣೆ ಶಿಬಿರ, ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.

೦೭. ಸಂಸ್ಥೆಯ ವತಿಯಿಂದ ಕಾರ್ಯಕ್ಷೇತ್ರದಲ್ಲಿ ಸಾಮಾಜಿಕ
ಕಾಳಜಿಗಾಗಿ ದುಡಿದ ಮಹಾನ್ ಚೇತನಗಳನ್ನೂ ಗುರುತಿಸಿ ,ಗೌರವಿಸುವುದು.

೦೮. ಶಾಲೆಗೆ ಅಗತ್ಯವಿರುವ ಶೈಕ್ಷಣಿಕ ಹಾಗು ಅಗತ್ಯ ಸಾಮಗ್ರಿಗಳ ಪೂರೈಕೆ.

೦೯. ಯುವ ಜನರು ಸ್ವಯಂ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ಅವರಿಗಿರುವ ಅವಕಾಶಗಳ ಕುರಿತು , ಬಲ್ಲವರಿಂದ ಉಪನ್ಯಾಸ, ಸಹಾಯ ಹಸ್ತ.

೧೦. ಮಕ್ಕಳಲ್ಲಿ , ಯುವಕರಲ್ಲಿ ಓದುವ ಹವ್ಯಾಸವನ್ನು ವ್ರುದ್ದಿಸುವುದು. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಲೆಕನಗಳ, ಕೃತಿಗಳ ಪ್ರಕಟಣೆ..........

ಹೀಗೆ..........ಹತ್ತು ಹಲವು ಕನಸುಗಳು ನಮ್ಮವು.........ಹಲವರ ಕನಸುಗಳನ್ನ ನನಸು ಮಾಡುವುದೇ ನಮ್ಮ ಅತಿ ದೊಡ್ಡ ಕನಸು.........ನಿಮ್ಮೆಲ್ಲರ ಸಹಕಾರ,ಸಲಹೆ, ಆಶಿರ್ವಾದವಿರಲಿ.........


Friday, February 29, 2008

ಕಟ್ಟೋಣ ಹೊಸ ನಾಡ............



ಆತ್ಮಿಯರೇ....

"ಯುವ ಶಕ್ತಿಯ ಸಮುದಾಯದ ಸಮರ್ಪಕ ಸಹಬಾಗಿತ್ವದಿಂದ " ಮಾತ್ರ "ನಮ್ಮ ದೇಶದ ಹಣೆಬರಹವನ್ನು ಬದಲಿಸಲು ಸಾದ್ಯ" ಎಂದು ನಂಬಿರುವ ಕೆಲವು ಹುಚ್ಚು ಗೆಳೆಯರು ಸೇರಿಕೊಂಡು ಕಟ್ಟಿರೋ ಒಂದು ಸಂಸ್ಥೆ........ಚುಕ್ಕಿ...........ಬಿಂದುವಿನಿಂದ ಅನಂತದೆಡೆಗೆ ಪಯಣ ಹೊರಟಿರೋ ಯುವ ಸೈನಿಕರು ನಾವುಗಳು........ಈಡಿ ಜಗತ್ತನ್ನೇ ಬದಲಿಸೋ ಶಕ್ತಿ ನಮ್ಮಲ್ಲಿದೆಯೋ ಇಲ್ವೋ ಗೊತ್ತಿಲ್ಲ.......ಅದ್ರೆ ನಮ್ಮ ಸುತ್ತಲ ಸಮುದಾಯದಲ್ಲಿ ಆರೋಗ್ಯಕರ ಬದಲಾವನೆಯನ್ನ,ಬೆಳವಣಿಗೆ ಯನ್ನು ನಮಗೆ ತರಲಿಕ್ಕೆ ಸಾದ್ಯ ide........ನಮ್ಮ ಸುದಾರನೆಯ ಅಳಿಲು ಪ್ರಯತ್ನಕ್ಕೆ,ಅಳಿಲು ಸೇವೆಗೆ,ನಿಮ್ಮ ಸಹಕಾರ,ಮಾರ್ಗದರ್ಶನ,ಆಶಿರ್ವಾದವಿರಲಿ...............

ನಿಮ್ಮಿಂದಲೂ ಕೂಡ ಈ ಸಮಾಜಕ್ಕೆ ,ತಾಯ್ನೆಲಕ್ಕೆ ,ಸುತ್ತಲ ಸಮುದಾಯಕ್ಕೆ ಏನಾದರೂ,ಕಿಂಚಿತ್ತಾದರೂ ಮಾಡ್ಲಿಕ್ಕೆ ಸಾದ್ಯ ಇದೆ..........ಹಾಗನ್ನಿಸುದಿಲ್ವೆ......????!!!!!!!...ಖಂಡಿತ ....ಹಾಗಾದರೆ ಬನ್ನಿ.....ಸಾಂಘಿಕ ಪ್ರಯತ್ನದ ಮೂಲಕ ಸುದಾರನೆಯ ಬೀಜ ಬಿತ್ತೋಣ..............ಒಂದು ಕರೆ ಇರಲಿ..........೯೯೬೪೪೩೮೩೯೩.........


ನಿಮ್ಮ ಅನಿಸಿಕೆಗಳಿಗೆ ಸ್ವಾಗತ..........

ಚುಕ್ಕಿ ಸಂಸ್ಥೆ (ರಿ).

. ಬಿಂದುವಿನಿಂದ ಅನಂತದೆಡೆಗೆ .......